ಕೋಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಜಯಂತ್ ನಿಧನಕ್ಕೆ ಹೊಸನಗರದ ಕಾಂಗ್ರೆಸ್ ಕಛೇರಿಯಲ್ಲಿ ಸಂತಾಪ ಸಭೆ

0 662

ಹೊಸನಗರ: ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕರಿಗೆರಸು ಕೆ.ವೈ. ಜಯಂತ್‌ರವರು ಸೋಮವಾರ ರಾತ್ರಿ 10:45ರ ಸುಮಾರಿಗೆ ಹೃದಯಘಾತದಿಂದ ನಿಧನರಾಗಿದ್ದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹೊಸನಗರದ ಕಾಂಗ್ರೆಸ್ ಕಛೇರಿ (ಗಾಂಧಿಮಂದಿರ) ಯಲ್ಲಿ ತಾಲ್ಲೂಕು ಬ್ಲಾಕ್ ಅಧ್ಯಕ್ಷ ಬಿ.ಜಿ.ನಾಗರಾಜ್‌ರವರ ನೇತೃತ್ವದಲ್ಲಿ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜಿ.ನಾಗರಾಜ್, ಜಯಂತ್‌ರವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದು ಇವರು ಮಾಡಿರುವ ಸೇವೆ ಅವಿಸ್ಮರಣೀಯವಾಗಿದ್ದು ಬಡವರು, ಶ್ರೀಮಂತರು ಎಂಬ ಭೇದ ಭಾವನೆ ಇವರಲಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂತಾಪ ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಎರಗಿ ಉಮೇಶ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಅಶ್ವಿನಿಕುಮಾರ್, ಹೆಚ್. ಮಹಾಬಲರಾವ್, ಚಂದ್ರಮೌಳಿ, ಲೇಖನಮೂರ್ತಿ, ನೂರ ಮೇಟಿಲ್ಡಾ ಸ್ವೀಕ್ವೇರ, ಜಯನಗರ ಗುರು, ಚಂದ್ರಕಲಾ ನಾಗರಾಜ್, ನೇತ್ರಾ ಸುಬ್ರಾಯ ಭಟ್, ಸಿದ್ದಪ್ಪ, ಸುರೇಶ್ ಕುಮಾರ್, ಮಂಜುನಾಥ್, ಉಬ್ಬೇದುಲ್ಲಾ ಇನ್ನೂ ಮುಂತಾದವರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!